ಅಂಕೋಲಾ: ಭಾರತೀಯ ಜನತಾ ಪಾರ್ಟಿ ರೈತ ಮೊರ್ಚಾ ಉತ್ತರ ಕನ್ನಡ ಅಂಕೋಲಾ ಮಂಡಲ, ಮಹಾಶಕ್ತಿ ಕೇಂದ್ರ ಅಗಸೂರು,ಶಕ್ತಿ ಕೇಂದ್ರ ಡೊಂಗ್ರಿ, ಹೆಗ್ಗಾರ ಬೂತ್ ಸಹಯೋಗದಲ್ಲಿ ಜೂನ್ 5 ಗುರುವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಅಶ್ವತ್ಥ ಸಸಿ ಮತ್ತು ಇತರೆ ಸಸಿ ನೆಡುವ ಮೂಲಕ ಆಚರಿಸಲಾಯಿತು.
ಕಾರ್ಯಕ್ರಮವನ್ನು ಸಂಘಟನೆ ಮಾಡಿದ ವಿ.ಎಸ್. ಭಟ್ಟ ಕಲ್ಲೇಶ್ವರ ಪರಿಸರದಿಂದ ನಾವು ಎಲ್ಲವನ್ನೂ ಪಡೆಯುತ್ತೇವೆ, ಅದರ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ ,ಪ್ಲಾಸ್ಟಿಕ್ ಮುಕ್ತ ಪರಿಸರವಾಗಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಕಲ್ಪತರು ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಶಿವರಾಮ ಭಟ್ಟ ಗುಡ್ಡೆ., ನಾರಾಯಣ ಹೆಗಡೆ, ಶಕ್ತಿ ಕೇಂದ್ರ ಪ್ರಮುಖರಾದ ಸುಧಾಕರ ಭಟ್ಟ, ಬೂತ್ ಅಧ್ಯಕ್ಷರುಗಳಾದ ಶೇಖರ್ ಗಾಂವ್ಕರ್, ಶ್ರೀಪಾದ ಬೆಳ್ಳಿ, ಯುವಕ ಸಂಘದ ಅಧ್ಯಕ್ಷರಾದ ಮಂಜುನಾಥ ಗಾಂವ್ಕರ್,ಪ್ರಮುಖರಾದ ಮಹಾಬಲೇಶ್ವರ ಭಟ್ಟ, ನಾಗರಾಜ ಹೆಗಡೆ, ಅನಂತ ಭಟ್ಟ, ಶ್ರೀಕೃಷ್ಣ ಭಟ್ಟ, ವೆಂಕಟ್ರಮಣ ಗಾಂವ್ಕರ್, ಬೂತ್ ಕಾರ್ಯದರ್ಶಿ ರಾಘವೇಂದ್ರ ಹೆಗಡೆ, ನರಸಿಂಹ ಭಟ್ಟ ಅಪ್ರತೋಟ, ಮಹಿಳಾ ಮಂಡಳದ ಶ್ರೀಮತಿ ಕವಿತಾ ಗಾಂವ್ಕರ್, ಪಕ್ಷದ ಕಾರ್ಯಕರ್ತರು, ಜಗದೀಶ್ ಸಿದ್ದಿ, ರವಿ ಸಿದ್ದಿ, ಮತ್ತು ಇತರರು ಪಕ್ಷದ ಪದಾಧಿಕಾರಿಗಳು, ನಾಗರಿಕರು ಭಾಗವಹಿಸಿದ್ದರು.